ನಾನೊಮ್ಮೆ ಶೃಂಗೇರಿಗೆ ತೆರಳಿದ್ದೆ . ಅಲ್ಲಿನ ಮೀನುಗಳಿಗೆ ತಿನ್ನಲು ಎರಡು ಪ್ಯಾಕೇಟು ಮಂಡಕ್ಕಿ ಹೊತ್ತು ತುಂಗೆಯ ಬಳಿ ನಿಂತಿದ್ದೆ . ಮಂಡಕ್ಕಿಯನ್ನು ನದಿಗೆ ಎಸೆಯುತ್ತಾ ಒಂದು ಪ್ಯಾಕೇಟು ಖಾಲಿಯಾಯಿತು . ಮತ್ತೊಂದು ಪ್ಯಾಕೇಟು ತೆರೆಯಲು ಅಣಿಯಾದೆ . ಆಗ ಬಳಿಗೆ ಬಂದ ಒಬ್ಬ ಅಜ್ಜ ನನ್ನೆದುರು ಕೈ ಚಾಚಿದರು . ಅವರೂ ಮೀನಿಗೆ ನೀಡಲೆಂದು ಅವರ ಬೊಗಸೆಗಳಿಗೂ ಮಂಡಕ್ಕಿ ಸುರಿದೆ. ನಾನು ನನ್ನ ಕೈಯಲ್ಲಿ ಸುರಿದುಕೊಳ್ಳುವಷ್ಟರಲ್ಲಿ ಅವರು ನಾಪತ್ತೆಯಾಗಿದ್ದರು . ಸುತ್ತ ಕಣ್ಣಾಡಿಸಿದರೆ 'ಕಪ್ಪೆ ಶಂಕರ ' ಮಠದ ಹಿಂದೆ ಗಬಗಬ ತಿನ್ನುತ್ತಿದ್ದರು. ಕರುಳು ಚುರುಕ್ಕೆನಿಸಿತು. ನನ್ನ ಕೈಯಲ್ಲಿ ಉಳಿದ ಮಂಡಕ್ಕಿಯನ್ನು ಅಜ್ಜನಿಗೆ ನೀಡಿ ಮೆಟ್ಟಿಲು ಹತ್ತಿ ಬಂದೆ.
- ಕಾವ್ಯಮಯಿ
- ಕಾವ್ಯಮಯಿ