ಈಸಿಚೇರಿನಲ್ಲಿ ಬೆನ್ನೊರಗಿಸಿ ಕೂತ ಹಳೆಯದೊಂದು ಅನುಭವ. ಹೆಂಡತಿ,ಮಗ, ಮಗಳು, ಅಣ್ಣ ತಮ್ಮ, ಅವರು ಇವರು ಎಲ್ಲರೂ ... ನೆನಪಲ್ಲಿ ಮೊನ್ನೆ ಮಾರಿದ ತಾನೇ ನೆಟ್ಟು ಬೆಳೆಸಿದ ತೋಟ... ಅಲ್ಲಿನ ಬಾಳೆಯ ಗಿಡ ಹಣ್ಣು ಬಿಟ್ಟು ಗೊನೆ ಮಾಗಿ ಬಾಳೆಯ ನಡು ಮುರಿಯದಂತೆ ಕೊಟ್ಟ ಊತ. ಗೊನೆ ಮಾರಿದ ಮೇಲೆ ಮರೆತ ಗಿಡ. ಮಳೆಯೊಂದು ಮುಗಿದು ವಿರಾಮದ ಹನಿಗಳ ಹರಿಕೆ. ಮಂದಕಣ್ಣಿನೆರಡು ತುದಿಯಲ್ಲೂ ಒರೆಸಿ ಒರೆಸಿ ಉಮ್ಮಳಿಸಿ ಬರುವ ಹೃದಯದ ವೇದನೆ.. ಬಯತ್ತಿರುವುದು ಆಪ್ಯ ಹೃದಯ. ಅತ್ತಿತ್ತ ಕೈಯ್ಯಾಡಿಸಲು ಸಿಗುವುದು ತನ್ನದೆನಿಸಿದ್ದ ಊರುಗೋಲು. ನಡುಗುವ ಕೈ ತಾಗಿ ಕೋಲು ಎರಡಡಿ ದೂರ ಬಿದ್ದಿದೆ. ಎದ್ದು ಹೋಗಿ ಹೆಕ್ಕಲು ಶಕ್ತಿಯಿಲ್ಲ. ಆಪ್ಯವಾದುದೊಂದು ಬಿದ್ದು ಕಳಕೊಂಡಷ್ಟು ಭಾರ.... - ಕಾವ್ಯಮಯಿ
No comments:
Post a Comment